ಶ್ರೀಪಾದರಾಜರ ಆರಾಧನೆಯನ್ನು ವಿಶಿಷ್ಟವಾಗಿ ಆಚರಿಸಿದ ಸಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು.

ಹರಿದಾಸ ಸಾಹಿತ್ಯದ ಸವ್ಯಸಾಚಿ ಮುಳಬಾಗಿಲಿನ ತಪೋನಿದಿ ಶ್ರೀಪಾದರಾಜರ ಆರಾಧನೆಯನ್ನು ದಿನಾಂಕ 13.6.22 ಸೋಮವಾರ ನಾಡಿನಾದ್ಯಂತ ಸಂಭ್ರಮದ ಸಡಗರ ಹಾಗು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಬಾರಿ  ಬೆಂಗಳೂರಿನ ಸಿಟಿ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ  ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಚ್ಚ ಬಾರತ ಆಂದೋಲನದ ಅಂಗವಾಗಿ ಹಾಗು ಪರಿಸರ ದಿನಾಚರಣೆಯ ಸಲುವಾಗಿ ಕೋಣನ ಕುಂಟೆ ಯ ರಾಯರ ಮಠದ ಸುತ್ತಮುತ್ತಲಿನ ರಸ್ತೆಯನ್ನು ಶುಚಿ ಮಾಡಿದರು. ಹಾಗು ಶ್ರೀಮಠದ ಆವರಣದಲ್ಲಿ ಗಿಡ ನೆಡುವ ಮೂಲಕ ಆಚರಿಸಿದರು .

ಕೋಣನ ಕುಂಟೆ ರಾಯರ ಮಠದ ಕಾರ್ಯದರ್ಶಿಗಳಾದ ಶ್ರೀ ಯುತ ಪಿ . ಎನ್. ಫಣಿ ಕುಮಾರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕಾರ್ಯಕ್ರಮದ  ಪ್ರಾಮುಖ್ಯತೆಯನ್ನು ತಿಳಿಸಿದರು. ಶ್ರೀಮಠದ ಅಧ್ಯಕ್ಷರಾದ ಡಾ||ಅನಂತ ಪದ್ಮನಾಭ ರಾವ್ ಅವರು  ರಾಘವೇಂದ್ರ ಸ್ವಾಮಿಗಳ ಪ್ರಸಾದವನ್ನು ವಿದ್ಯಾರ್ಥಿಗಳಿಗೆ ನೀಡಿ  ರಾಘವೇಂದ್ರ ಸ್ವಾಮಿಗಳು  ಎಲ್ಲರಿಗೂ ಉತ್ತಮ ಭವಿಷ್ಯ ನೀಡಲಿ ಎಂದು ಹಾರೈಸಿದರು.


Leave a Reply

Your email address will not be published. Required fields are marked *