ಗಾನೋತ್ಸವ-2023
ಗಾನಸುಧಾ ಮ್ಯೂಸಿಕಲ್ ಅಕಾಡೆಮಿಯ ವತಿಯಿಂದ ಜಯನಗರದ ನಾಲ್ಕನೇ ಬಡಾವಣೆಯಲ್ಲಿರುವ ವಿವೇಕ ಆಡಿಟೋರಿಯಂ ನಲ್ಲಿ ಜುಲೈ 30 ರಂದು ಬೆಳಗ್ಗೆ ಇಂದ ರಾತ್ರಿಯವರೆಗೆ ಏರ್ಪಡಿಸಿದ್ದ “ಗಾನೋತ್ಸವ-2023” ಕಾರ್ಯಕ್ರಮದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ ಮತ್ತು ಲಘು ಸಂಗೀತ ಗಾಯನ ಪ್ರಸ್ತುತ ಪಡಿಸಿದರು. ಈ ಸಮಾರಂಭದಲ್ಲಿ ನಾಡಿನ ಸಂಗೀತ ದಿಗ್ಗಜರುಗಳಾದ ಶ್ರೀ ಶೃಂಗೇರಿ ನಾಗರಾಜ್ ಹೆಚ್.ಎಸ್. ಮತ್ತು ಶ್ರೀ ಪುತ್ತೂರು ನರಸಿಂಹ ನಾಯಕ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರೂ, ಗುರುಗಳೂ ಆದ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರು ಏರ್ಪಡಿಸಿದ್ದರು.
