ಬಲಭದ್ರ ಎಂದು ಕರೆಯಲ್ಪಡುವ ಬಲರಾಮ ಶ್ರೀಕೃಷ್ಣ ದೇವನ ಅಣ್ಣನು….
ಬಲರಾಮ ಎಂದರೆ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವುದು ಶ್ರೀಕೃಷ್ಣ ಅಣ್ಣ. ಶ್ರೀಕೃಷ್ಣನು ಲೋಕ ಕಲ್ಯಾಣ ಕೆಲಸ ಕೈಗೊಂಡಾಗ ಅವನೊಂದಿಗೆ ಸಹಕರಿಸುತ್ತಿದ್ದನು ಎನ್ನುವುದಷ್ಟೇ ನಮಗೆ ತಿಳಿದಿರುವ ವಿಚಾರ.

ಈ ವಿಚಾರಗಳಿಗಿಂತಲೂ ಮಿಗಿಲಾಗಿ ಸಾಕಷ್ಟು ಸಂಗತಿಗಳು ಬಲರಾಮನ ಕಥೆಯೊಂದಿಗೆ ಬೆಸೆದುಕೊಂಡಿದೆ. ಅತ್ಯಂತ ಶಕ್ತಿ ಶಾಲಿಯಾದ ಬಲರಾಮನು ಮನುಕುಲಕ್ಕೆ ಒಂದು ಆದರ್ಶ ವ್ಯಕ್ತಿ.
ಬಲರಾಮನ ಪರಿಚಯ
ಬಲಭದ್ರ ಎಂದು ಕರೆಯಲ್ಪಡುವ ಬಲರಾಮನು ಶ್ರೀಕೃಷ್ಣ ದೇವನ ಅಣ್ಣ. ರೇವತಿ ದೇವಿಯ ಪತಿ. ಹೆಸರೇ ಹೇಳುವಂತೆ ಬಲರಾಮನು ಅತ್ಯಂತ ಶಕ್ತಿವಂತನು.
ತಂದೆ ತಾಯಿಯ ವಿಧೇಯ ಮಗನು, ಆದರ್ಶ ಸಹೋದರನು, ಗಂಡನು ಮತ್ತು ಆದರ್ಶ ವ್ಯಕ್ತಿಯಾಗಿದ್ದನು. ನ್ಯಾಯವಾದಿಯಾದ ಬಲರಾಮನು ಸದಾ ಕಾಲ ನೀಲಿ ಬಟ್ಟೆಯನ್ನು ಧರಿಸುತ್ತಿದ್ದನು.
ಸ್ವಭಾವದಲ್ಲಿ ನಿಯಂತ್ರಕನಾಗಿದ್ದನು. ರಕ್ಷಕನು ಹಾಗೂ ಪ್ರಾಮಾಣಿಕ ವ್ಯಕ್ತಿಯೂ ಆದ ಬಲರಾಮನು ಅತ್ಯಂತ ಶಕ್ತಿಯನ್ನು ಹೊಂದಿರುವ ದೇವನು. ಪುರಾಣ ಕಥೆಯಲ್ಲಿ ಬಲರಾಮನು ಅತ್ಯಂತ ಆದರ್ಶ ವ್ಯಕ್ತಿಯಾಗಿದ್ದನು.
ಮಹಾನ್ ದೈವ ಶಕ್ತಿಯನ್ನು ಹೊಂದಿರುವ ಶ್ರೀ ಕೃಷ್ಣನ ಸಹೋದರನಾಗಿದ್ದನು ಎನ್ನುವುದು ಎಲ್ಲರೂ ತಿಳಿದಿರುವ ಸಂಗತಿ.
ದೈವ ರೂಪ
ಶ್ರೀ ಕೃಷ್ಣ ಪರಮಾತ್ಮನ ಅಣ್ಣ ಬಲರಾಮ. ಅವನನ್ನು ಬಲದೇವ, ಬಲಭದ್ರ, ಹಲಾಧರ ಮತ್ತು ಹಲಾಯುಧ ಎಂದು ಕರೆಯುತ್ತಾರೆ. ಜಗನ್ನಾಥ ಸಂಪ್ರದಾಯದ ಪ್ರಕಾರ ಬಲರಾಮನನ್ನು ತ್ರಿಶೂಲ ದೇವತೆಗಳಲ್ಲಿ ಒಬ್ಬನು.
ವೈಷ್ಣವ ಪಟ್ಟಿಯ ಪ್ರಕಾರ ಬಲರಾಮನು ವಿಷ್ಣುವಿನ 8ನೇ ಅವತಾರ ಎಂದು ಪರಿಗಣಿಸಲಾಗಿದೆ. ಈ ಅವತಾರದಲ್ಲಿ ಮಾನವರನ್ನು ಕೃಷಿಯ ಕಡೆಗೆ ಕರೆದೊಯ್ಯುವ ಜೀವನ ವಿಧಾನವನ್ನು ಸೂಚಿಸುತ್ತದೆ ಎಂದು ಹೇಳಲಾಗುವುದು.
ಇಂದ್ರ ಮತ್ತು ಇತರ ದೇವತೆಗಳು ಮಥುರ ರಾಜನಾದ ಕಂಸನಿಂದ ನಡೆಯುವ ಉಪಟಳದಿಂದ ಪಾರು ಮಾಡಲು ಶ್ರೀ ವಿಷ್ಣು ದೇವರಲ್ಲಿ ಬೇಡಿಕೊಂಡರು. ಆಗ ವಿಷ್ಣು ದೇವನು ತನ್ನ ತಲೆಯಿಂದ ಒಂದು ಬಿಳಿ ಮತ್ತು ಒಂದು ಕಪ್ಪು ಕೂದಲನ್ನು ತೆಗೆದು, ಇವರಿಬ್ಬರು ರಾಕ್ಷಸರ ವಿರುದ್ಧ ಹೋರಾಡಲು ಬರುತ್ತಾರೆ ಎಂದು ಭರವಸೆ ನೀಡಿದನು. ಅದರಂತೆಯೇ ಮೊದಲು ಬಲರಾಮ(ಬಿಳಿ ಕೂದಲು) ನಂತರ ಕೃಷ್ಣ(ಕಪ್ಪು ಕೂದಲು) ಇಬ್ಬರು ನಂದ ರಾಜನ ಆಶ್ರಯದಲ್ಲಿ ಹುಟ್ಟಿ ಬೆಳೆದರು. ಅಂತೆಯೇ ಒಟ್ಟಿಗೆ ಯುದ್ಧ ಮಾಡಿದರು ಎಂದು ಪುರಾಣ ಕಥೆ ತಿಳಿಸುತ್ತದೆ.
ಆದಿ ಅನಂತ ಶೇಷ ಅವತಾರ
ಶ್ರೀ ವಿಷ್ಣುವಿನ ಅವತಾರದ ಜೊತೆಗೆ ಅನೇಕ ಗ್ರಂಥಗಳು ಬಲರಾಮನನ್ನು ಆದಿ ಅನಂತ ಶೇಷ ನಾಗ ಅವತಾರ ಎಂದು ಸಹ ಕರೆಯಲಾಗುವುದು. ಅನೇಕ ತಲೆಯನ್ನು ಹೊಂದಿರುವ ಶೇಷ ನಾಗನು ಹಾವುಗಳ ರಾಜ. ಅವನ ಮೇಲೆಯೇ ವಿಷ್ಣು ಕ್ಷೀರ ಸಾಗರದಲ್ಲಿ ನೆಲೆಸಿರುತ್ತಾನೆ ಎಂದು ಹೇಳಲಾಗುವುದು. ಬಲರಾಮನು ಆನೆಗಿಂತಲೂ ಹೆಚ್ಚು ಬಲಶಾಲಿಯಾದವನು ಎಂದು ಹೇಳಲಾಗುವುದು.
ಲಕ್ಷ್ಮಣನು ಬಲರಾಮನಾಗಿ ಪುನರ್ಜನ್ಮ ಪಡೆದನು
ರಾಮಾಯಣದಲ್ಲಿ ಲಕ್ಷ್ಮಣನು ರಾಮನ ತಮ್ಮನಾಗಿದ್ದನು. ತನ್ನ ಸಹೋದರನಿಗೆ ಹಿರಿಯ ಸಹೋದರನಾಗಿ ಇರಬೇಕು ಎಂದು ಬಯಸಿದ್ದನು. ಹಾಗಾಗಿಯೇ ನಂತರದ ಜನ್ಮದಲ್ಲಿ ಶ್ರೀಕೃಷ್ಣ ಹಿರಿಯ ಸಹೋದರ ಬಲರಾಮನಾಗಿ ಅವತರಿಸಿ ಬಂದನು. ರಾಮಾಯಣದಲ್ಲಿ ರಾಮ ಲಕ್ಷ್ಮಣರಂತೆ ಮಹಾ ಭಾರತದಲ್ಲಿ ಕೃಷ್ಣ ಬಲರಾಮನು ಅತ್ಯಂತ ಪ್ರೀತಿಯ ಸಹೋದರರಾಗಿ ಇದ್ದರು. ಎರಡು ಅವತಾರದಲ್ಲೂ ಬೇರೆ ಬೇರೆ ತಾಯಂದಿರರನ್ನು ಹೊಂದಿದ್ದರು.
ಶಕ್ತಿಯುತ ಯೋಧನಾಗಿದ್ದನು
ಬಲರಾಮನು ಅತ್ಯಂತ ಶಕ್ತಿಶಾಲಿಯಾಗಿದ್ದನು. ಇವನು ಬಾಲ್ಯದಲ್ಲಿ ಇರುವಾಗಲೇ ಕಂಸ ಕಳುಹಿಸುತ್ತಿದ್ದ ಅನೇಕ ಅಸುರರನ್ನು ಕೊಂದುಹಾಕಿದ್ದನು. ಅವರಲ್ಲಿ ಪ್ರಮುಖವಾಗಿ ಧೇನುಕಾಸುರ ಮತ್ತು ಪ್ರಲಾಂಬಸುರ ಎನ್ನುವ ರಾಕ್ಷಸರನ್ನು ಸದೆ ಬಡಿದಿದ್ದನು. ಕೆಲವರು ಕೃಷ್ಣನಿಂದ ಇನ್ನೂ ಕೆಲವರು ಬಲರಾಮನಿಂದ ವಧಿಸಲ್ಪಟ್ಟರು. ಬಲರಾಮನ ಶಕ್ತಿಯು ಆನೆಗಳ ಹಿಂಡುಗಳಿಗೆ ಇರುವ ಶಕ್ತಿಗಳಿಗಿಂತ ಹೆಚ್ಚು ಬಲವನ್ನು ಹೊಂದಿದ್ದನು ಎನ್ನಲಾಗುವುದು.
ಭೀಮ ಮತ್ತು ಧುರ್ಯೋಧನನ ಗುರು
ಬಲರಾಮನು ಭೀಮ ಮತ್ತು ದುರ್ಯೋದನನಿಗೆ ಗುರುವಾಗಿದ್ದನು. ಅವರಿಬ್ಬರಿಗೂ ಗಾಢವಾದ ಹಾಗೂ ಸೂಕ್ತ ರೀತಿಯಲ್ಲಿ ಹೇಗೆ ಯುದ್ಧ ಮಾಡಬೇಕು ಎನ್ನುವ ವಿದ್ಯೆಯನ್ನು ಕಲಿಸಿಕೊಟ್ಟಿದ್ದನು. ಧುರ್ಯೋದನನು ಬಲರಾಮನ ನೆಚ್ಚಿನ ಶಿಷ್ಯನಾಗಿದ್ದನು. ಹಾಗಾಗಿಯೇ ಯುದ್ಧದಲ್ಲಿ ತಟಸ್ಥತೆಯನ್ನು ಕಾಯ್ದುಕೊಂಡನು. ಬಲರಾಮನು ಇಬ್ಬರನ್ನೂ ಸಮನಾಗಿಯೇ ನೋಡಿಕೊಳ್ಳುತ್ತಿದ್ದನು.
ಕೃಷಿಯ ದೇವ
ಬಲರಾಮನು ಸಾಮಾನ್ಯವಾಗಿ ನೇಗಿಲನ್ನು ಚಲಾಯಿಸುವ ಚಿತ್ರವನ್ನು ನೋಡುತ್ತೇವೆ. ಬಲರಾಮನನ್ನು ಕೃಷಿಯ ದೇವ ಎಂದು ಕರೆಯಲಾಗುವುದು. ಬಲಶಾಲಿಯಾದ ಬಲರಾಮನ ಆಯುಧ ನೇಗಿಲು. ಯಾರು ಕೃಷಿಯಲ್ಲಿ ಏಳಿಗೆ ಹೊಂದಲು ಬಯಸುತ್ತಾರೆ, ಅವರು ಬಲರಾಮನ ಪೂಜೆ ಮಾಡಬೇಕು ಎಂದು ವಿಷ್ಣುಧರ್ಮೋತ್ತರ ಪುರಾಣವು ತಿಳಿಸುತ್ತದೆ.
ಬಲರಾಮ
ಯೋಗ ಸಮಾಧಿ
ಮಹಾಭಾರತದ ಕೆಲವು ವರ್ಷಗಳ ನಂತರ ಕೃಷ್ಣ ಸಾಮ್ರಾಜ್ಯದ ಯಾದವರು ಎನ್ನುವ ಪುರುಷರೆಲ್ಲರು ತಮ್ಮ ಧಾರ್ಮಿಕ ಕರ್ತವ್ಯಗಳನ್ನು ಮರೆತು ಪರಸ್ಪರ ಹೋರಾಟ ಹಾಗೂ ಕಿತ್ತಾಟವನ್ನು ನಡೆಸಿದರು. ಯಾದವರ ಅಂತರ್ಯುದ್ಧದಲ್ಲಿ ಒಬ್ಬರನ್ನೊಬ್ಬರು ಕೊಂದುಹಾಕಿದರು. ವಿಚಲಿತನಾದ ಬಲರಾಮನು ಜೀವನದಲ್ಲಿ ಎಲ್ಲಾ ಆಸಕ್ತಿಯನ್ನು ಕಳೆದುಕೊಂಡನು. ನಂತರ ಮರದ ಕೆಳಗೆ ಕುಳಿತು ಶೀಘ್ರದಲ್ಲಿಯೇ ಯೋಗ ಸಮಾಧಿ ಸ್ಥಿತಿಯನ್ನು ತಲುಪಿದನು. ಆ ಹೊತ್ತಿಗೆ ಹಾವಿನ ಆಕಾರದಲ್ಲಿ ಇರುವ ಒಂದು ಚೇತನವು ದೇಹದಿಂದ ಹೊರ ಬಂದಿತು. ಅದು ಬಲರಾಮನ ಆದಿ ಅನಂತ ಶೇಷ ಅವತಾರದ ರೂಪವಾಗಿತ್ತು. ನಂತರ ಬಲರಾಮನ ದೇಹವು ಶವದಂತೆ ಬಿದ್ದುಹೋಯಿತು.
ಆದಿಶೇಷನ ಅವತಾರ ಬಲರಾಮ
ಸರಳ ಮತ್ತು ಗೌರವಾನ್ವಿತ
ಬಲರಾಮನು ಬಹಳ ನೇರ ಮತ್ತು ಸರಳ ವ್ಯಕ್ತಿಯಾಗಿದ್ದನು. ಕೃಷ್ಣನ ಸಂಕೀರ್ಣ ತರ್ಕವನ್ನು ಎಂದಿಗೂ ಅರ್ಥೈಸಿಕೊಳ್ಳುತ್ತಿರಲಿಲ್ಲ. ಆದರೆ ತನ್ನ ಕಿರಿಯ ಸಹೋದರನ ಜೊತೆಗೆ ಇರುತ್ತಿದ್ದನು. ಬಲರಾಮನಿಗೆ ಧುರ್ಯೋಧನ ಹಾಗೂ ಪಾಂಡವರು ಯುದ್ಧ ಮಾಡುವುದು ಇಷ್ಟ ಇರಲಿಲ್ಲ. ಹಾಗಾಗಿ ಇಬ್ಬರ ಕಡೆಯೂ ನಿಲ್ಲದೆ, ಯುದ್ಧ ಮಾಡದೆ ಇರಲು ಸಲಹೆ ನೀಡಿದರು. ಆದರೆ ಅವರು ನಿರಾಕರಿಸಿದರು. ಯುದ್ಧದ ಸಮಯದಲ್ಲಿ ತೀರ್ಥ ಯಾತ್ರೆಯನ್ನು ಕೈಗೊಂಡು, ಯುದ್ಧದ ಕೊನೆಯಲ್ಲಿ ಬಲರಾಮ ಬಂದನು ಎಂದು ಹೇಳಲಾಗುವುದು.
ವಿಶೇಷ ವಿವಾಹ
ಅತ್ಯಂತ ಸಮೃದ್ಧ ಸಾಮ್ರಾಜ್ಯವನ್ನು ಹೊಂದಿದ್ದ ಕುಶಸ್ಥಲಿಯ ರಾಜ ಕಕುದ್ಮಿ(ರೈವತ) .ಅವನ ಏಕೈಕ ಪುತ್ರಿ ರೇವತಿ. ಅವಳೇ ಬಲರಾಮನ ಹೆಂಡತಿ. ಅತ್ಯಂತ ಸುಂದರಿ ಹಾಗೂ ಬುದ್ಧಿವಂತೆಯಾದ ತನ್ನ ಮಗಳಿಗೆ ಯೋಗ್ಯ ವರವನ್ನು ಹುಡುಕಿ ಕೊಡಬೇಕು ಎಂದು ತಂದೆಯು ಬ್ರಹ್ಮಲೋಕಕ್ಕೆ ಹೋಗಿದ್ದನು. ಆಗ ಬ್ರಹ್ಮನು ನಿನ್ನ ಮಗಳಿಗೆ ಸೂಕ್ತವಾದ ವರ ಭೂಲೋಕದಲ್ಲಿ ಇದ್ದಾನೆ. ವಿಷ್ಣು ದೇವನು ಈಗ ಕೃಷ್ಣಮತ್ತು ಆದಿಶೇಷ ಬಲರಾಮನಅವತಾರದಲ್ಲಿ ಇದ್ದಾನೆ. ನಿನ್ನ ಮಗಳನ್ನು ಬಲರಾಮನಿಗೆ ನೀಡಿ ವಿವಾಹ ಮಾಡಲು ಸಲಹೆ ನೀಡಿದನು. ಅದರಂತೆಯೇ ರಾಜನು ತನ್ನ ಮಗಳನ್ನು ಬಲರಾಮನಿಗೆ ಕೊಟ್ಟು ವಿವಾಹ ಮಾಡಿದನು ಎಂದು ಹೇಳಲಾಗುವುದು.
ದೈವಿಕ ಜನನ
ದೇವಕಿಗೆ ಹುಟ್ಟುವ 8ನೇ ಮಗುವಿನಿಂದ ಕಂಸನ ವಧೆಯಾಗುವುದು ಎನ್ನುವ ಆಕಾಶವಾಣಿ ಕೇಳಿದ ಬಳಿಕ ಕಂಸನು ದೇವಕಿ ಮತ್ತು ವಾಸುದೇವನನ್ನು ಸೆರೆಮನೆಯಲ್ಲಿ ಇಟ್ಟನು. ನಂತರ ಅವರಿಗೆ ಹುಟ್ಟಿದ ಆರು ಮಕ್ಕಳನ್ನು ಕಂಸ ಸಾಯಿಸಿದನು. ಏಳನೇ ಮಗುವು ದೈವತ್ವವನ್ನು ಪಡೆದುಕೊಂಡಿದೆ ಎನ್ನುವುದು ದೇವಕಿಗೆ ಅರ್ಥವಾಗಿತ್ತು. ಆಗ ಭಗವಾನ್ ವಿಷ್ಣುವು ಯೋಗಮಯನನ್ನು ಕರೆದು ತನ್ನ ಯೋಜನೆಯು ಬದಲಾಗಿತರುವುದನ್ನು ತಿಳಿಸಿದನು. ನಂತರ ಯೋಗಮಯನು ಶೇಷ ನಾಗ್(ಬಲರಾಮ)ನನ್ನು ವಾಸುದೇವನ ಇನ್ನೊಬ್ಬ ಪತ್ನಿ ರೋಹಿಣಿಯ ಗರ್ಭಕ್ಕೆ ಕರೆದೊಯ್ಯುವಂತೆ ಹೇಳಿದನು. ಅದರಂತೆಯೇ ಯೋಗಮಯನು ಯಶೋಧ ಮತ್ತು ರೋಹಿಣಿಯ ಗರ್ಭದಲ್ಲಿ ಪ್ರವೇಶಿಸಿದನು. ಅದರಂತೆಯೇ ಬಲರಾಮನು ದೈವ ಶಕ್ತಿಯ ರೂಪದಲ್ಲಿ ಜನಿಸಿದನು ಎಂದು ಪುರಾಣ ಕಥೆಯು ವಿವರಿಸುತ್ತದೆ.
ಬಲರಾಮ ಜಯಂತಿ ಪೂಜೆ ಮುಹೂರ್ತ
ಬಲರಾಮ ಜಯಂತಿ ಮಂಗಳವಾರ, ಸೆಪ್ಟೆಂಬರ್ 5, 2023
ಷಷ್ಠಿ ತಿಥಿ ಆರಂಭ – 16:41 ಸೆಪ್ಟೆಂಬರ್ 04, 2023 ರಂದು
ಷಷ್ಠಿ ತಿಥಿ ಕೊನೆಗೊಳ್ಳುತ್ತದೆ – 15:46 ಸೆಪ್ಟೆಂಬರ್ 05, 2023 ರಂದು
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬