ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಜ್ಜನಹಳ್ಳಿ ಪಂಚಾಯತಿಯ ದೊಡ್ಡ ಆಲದಮರದ ಬಳಿ ಇರುವ ಶ್ರೀಆನಂದ ಗೋವಿಂದ ದೇವಸ್ಥಾನದಲ್ಲಿ ಶ್ರೀನಾಟ್ಯ ಸನ್ನಿದಿ ಭರತನಾಟ್ಯ ಕಲಾ ಶಾಲೆಯ ಮಕ್ಕಳು ನೃತ್ಯ ಸೇವೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಸುಧೀಂದ್ರರಾವ್, ಟಿ ಸಿ ಎಸ್ ನ ರಜನಿಶ್ರೀನಿವಾಸ್, ನಿವೃತ್ತ ಮುಖ್ಯ ಶಿಕ್ಷಕಿ ಹೇಮಾವತಿ, ದೇವಸ್ಥಾನ ಸಂಸ್ಥಾಪಕ ವೈಕುಂಠ ದಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
