ಬೆಂಗಳೂರು : ನೃತ್ಯ ದಿಶಾ ಟ್ರಸ್ಟಿನ ವತಿಯಿಂದ ಸೆಪ್ಟೆಂಬರ್ 30, ಶನಿವಾರ ಸಂಜೆ ಕೆ.ಆರ್. ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ “ನೃತ್ಯ ನೀರಾಜನ” ಎಂಬ ಶೀರ್ಷಿಕೆಯಲ್ಲಿ ಕಿರಿಯ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಜರುಗಿತು.

‘ಕಲಾಭೂಷಿಣಿ’ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ನಯನ ಹರೀಶ್, ಕು|| ಪವಿತ್ರ ರಮೇಶ್ ಮತ್ತು ಕು|| ತ್ರಿಶಾ ಶಿವಕುಮಾರ್ ಇವರುಗಳು ಭರತನಾಟ್ಯ ಪ್ರದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕೊಳಲು ವಾದಕರಾದ ವಿ|| ವೇಣುಗೋಪಾಲ್, ಮೃದಂಗ ವಿ|| ಗಿರಿಧರ್ ಹಾಗೂ ವಿ|| ಸುಮ ಕೃಷ್ಣಮೂರ್ತಿ ವಹಿಸಿದ್ದರು.
ಕಲಾವಿದರು ಮೊದಲಿಗೆ ಭರತನಾಟ್ಯ ಮಾರ್ಗದಲ್ಲಿನ ರಾಗದ ‘ಪುಷ್ಪಾಂಜಲಿಯೊಂದಿಗೆ ಕಲಾವಿದರು ಕಾರ್ಯಕ್ರಮ ಪ್ರಾರಂಭಿಸಿ, ತದನಂತರ ಆದಿಶಂಕರರ “ಗಣೇಶ ಶ್ಲೋಕ” ನರ್ತಿಸಿದರು. ಮುಂದೆ ಖಂಡ ಅಲರಿಪು, ತೋಡಿ ಜತಿಸ್ವರ ನರ್ತಿಸಿದರು. ಕು|| ತ್ರಿಶಾ ಶಿವಕುಮಾರ್- ತಂಜಾವೂರು ಶಂಕರ್ ಅಯ್ಯರ್ ರವರ “ಮಹಾದೇವ ಶಿವ ಶಂಭೋ”,
ಶ್ರೀ ಅದಿಶಂಕರಚಾರ್ಯರ “ಐಗಿರಿ ನಂದಿನಿ”, ಕು|| ನಯನ ಹರೀಶ್ ನರ್ತಿಸಿದರು. ಕು||ಪವಿತ್ರ ರಮೇಶ್ ಅನ್ನಮಾಚಾರ್ಯರ “ಬ್ರಹ್ಮಮೊಕ್ಕಟೆ”, “ಕಂಜದಳಾಯತಾಕ್ಷಿ ಕಾಮಾಕ್ಷಿ” ಹಾಗೂ
ಬೃಂದಾವನಿ ರಾಗದ “ತಿಲ್ಲಾನ”ದೊಂದಿಗೆ ಕಾರ್ಯಕ್ರಮ ಸಂಪೂರ್ಣಗೊಂಡಿತು.